ಕ್ಯೂಬಾ ಕಮ್ಯೂನಿಸ್ಟ್ ಕ್ರಾಂತಿಯ ಇತಿಹಾಸದಲ್ಲಿ ಅಜರಾಮರವಾಗಿ ಉಳಿದ ಹೆಸರು ಎಂದರೆ ಎರ್ಣೆ ಸ್ಟೋ ‘ಚೆ’ ಗುವರಾ, ಜಗತ್ತಿನಾದ್ಯಂತ ಕ್ರಾಂತಿ, ಸಮಾನತೆ ಮತ್ತು ಸಾಮ್ರಾಜ್ಯವಾದ ವಿರೋಧದ ಸಂಕೇತವಾಗಿ ಗುರುತಿಸಲ್ಪಟ್ಟ ಚೆ ಗುವರಾ, ಕೇವಲ ಕ್ಯೂಬಾದ ನಾಯಕನಲ್ಲ; ಆತ ಒಂದು ಆಲೋಚನೆ, ಒಂದು ಚಳವಳಿಯ ಪ್ರತಿರೂಪ. 1928 ಜೂನ್ 14ರಂದು ಅರ್ಜೆಂಟೀನಾದ ರೊಸಾರಿಯೋ ನಗರದಲ್ಲಿ ಜನಿಸಿದ ಚೆ ಗುವೆರಾ ವೈದ್ಯಕೀಯ ಶಿಕ್ಷಣ ಪಡೆದವರು. ಆದರೆ ಸಮಾಜದಲ್ಲಿನ ಅಸಮಾನತೆ, ದಾರಿದ್ರ ಮತ್ತು ಶೋಷಣೆ ಅವರ ಮನಸ್ಸನ್ನು ಕ್ರಾಂತಿಯ ದಿಕ್ಕಿಗೆ ತಿರುಗಿಸಿತು. ಲ್ಯಾಟಿನ್ ಅಮೆರಿಕಾದ ಹಲವು ದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದ ವೇಳೆ ಬಡವರ ಬದುಕನ್ನು ನೇರವಾಗಿ ಕಂಡು, ಶಸ್ತ್ರಸಜ್ಜಿತ ಹೋರಾಟವೇ ಸಾಮಾಜಿಕ ನ್ಯಾಯಕ್ಕೆ ದಾರಿ ಎಂಬ ನಂಬಿಕೆ ಅವರಿಗೆ ಬೇರೂರಿತು. 1955ರಲ್ಲಿ ಮೆಕ್ಸಿಕೋದಲ್ಲಿ ಫಿಡೆಲ್ ಕ್ಯಾಸ್ಕೊ ಅವರನ್ನು ಭೇಟಿಯಾದುದು ಚೆ ಗುವೆರಾರ ಜೀವನದ ತಿರುವು ಕ್ಷಣ. ಕ್ಯಾಸ್ ನೇತೃತ್ವದ ಕ್ಯೂಬಾ ಕ್ರಾಂತಿಯಲ್ಲಿ ಪ್ರಮುಖ ಯೋಧನಾಗಿ ಚೆ ಸೇರ್ಪಡೆಯಾದರು. 1959ರಲ್ಲಿ ಫುಲೈನ್ಸಿಯೋ ಬಾಟಿಸ್ನಾ ಸರ್ಕಾರವನ್ನು ಉರುಳಿಸಿದ ಕ್ರಾಂತಿಯಲ್ಲಿ ಚೆ ಗುವೆರಾರ ಪಾತ್ರ ನಿರ್ಣಾಯಕವಾಗಿತ್ತು. ಕ್ರಾಂತಿಯ ನಂತರ ಕ್ಯೂಬಾದಲ್ಲಿ ಹೊಸ ಸಮಾಜವಾದಿ ವ್ಯವಸ್ಥೆಯನ್ನು ಕಟ್ಟುವಲ್ಲಿ ಅವರು ಪ್ರಮುಖ ಜವಾಬ್ದಾರಿಗಳನ್ನು ವಹಿಸಿದರು.
ಚೆ ಗುವರಾ ಕ್ಯೂಬಾದ ರಾಷ್ಟ್ರೀಯ ಬ್ಯಾಂಕಿನ ಅಧ್ಯಕ್ಷರಾಗಿಯೂ, ಕೈಗಾರಿಕಾ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಆದರೆ ಅಧಿಕಾರ ಮತ್ತು ಹುದ್ದೆಗಳಿಗಿಂತ ಕ್ರಾಂತಿ ಅವರ ಜೀವನದ ಉದ್ದೇಶವಾಗಿತ್ತು. “ಒಂದು ದೇಶದಲ್ಲಿ ಸೀಮಿತವಾಗಿರುವ ಕ್ರಾಂತಿ ಅಪೂರ್ಣ” ಎಂಬ ನಂಬಿಕೆಯಿಂದ ಅವರು ಕ್ಯೂಬಾವನ್ನು ತೊರೆದು ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕ್ರಾಂತಿಯನ್ನು ಹರಡುವ ಪ್ರಯತ್ನ ನಡೆಸಿದರು.1967ರಲ್ಲಿ ಬೊಲಿವಿಯಾದಲ್ಲಿ ಚೆ ಗುವೆರಾ ಬಂಧನಕ್ಕೊಳಗಾಗಿ ಕೊಲ್ಲಲ್ಪಟ್ಟರು. ಅವರ ಮರಣ ದೇಹವನ್ನು ನಾಶಮಾಡಿದರೂ, ಅವರ ಆಲೋಚನೆಗಳನ್ನು ಕೊಲ್ಲಲಾಗಲಿಲ್ಲ. ಇಂದಿಗೂ ಚೆ. ಗುವೆರಾರ ಮುಖಚಿತ್ರ ಯುವಜನತೆಯ ಟೀ-ಶರ್ಟ್ಗಳಲ್ಲಿ ಧ್ವಜಗಳಲ್ಲಿ ಮತ್ತು ಪ್ರತಿಭಟನಾ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತದೆ.ಕೆಲವರಿಗೆ ಚೆ ಗುವರಾ ಹೀರೋ, ಇನ್ನೂ ಕೆಲವರಿಗೆ ವಿವಾದಾತ್ಮಕ ವ್ಯಕ್ತಿತ್ವ. ಆದರೆ ಒಂದು ವಿಷಯ ನಿಶ್ಚಿತ ಅವರು ಶೋಷಿತ ಜನರ ಪರವಾಗಿ ನಿಂತು, ತಮ್ಮ ನಂಬಿಕೆಯಿಗಾಗಿ ಪ್ರಾಣ ತ್ಯಾಗ ಮಾಡಿದ ಕ್ರಾಂತಿಕಾರಿ. ಅದಕ್ಕಾಗಿಯೇ ಚೆ ಗುವೆರಾ ಇತಿಹಾಸದ ಪುಟಗಳಲ್ಲಿ ಮಾತ್ರವಲ್ಲ, ಜಗತ್ತಿನ ಜನಮನದಲ್ಲೂ ಸದಾಕಾಲ ಜೀವಂತ.
ಯುವ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ, ಗುವೆರಾ ದಕ್ಷಿಣ ಅಮೆರಿಕಾದಾದ್ಯಂತ ಸಂಚರಿಸಿದರು ಮತ್ತು ಅಲ್ಲಿ ಕಂಡ ದಾರಿದ್ರ, ಹಸಿವು ಹಾಗು ರೋಗಗಳಿಂದ ಬೆಚ್ಚಿ ಬಿದ್ದರು. ಅವರು ಲ್ಯಾಟಿನ್ ಅಮೆರಿಕಾದ ಮೇಲೆ ಅಮೆರಿಕ ಸಂಯುಕ್ತ ಸಂಸ್ಥಾನ ನಡೆಸುತ್ತಿದ್ದ ಪೂಂಜಿವಾದಿ ಶೋಷಣೆ ಎಂದು ಭಾವಿಸಿದುದನ್ನು ಉರುಳಿಸಲು ಸಹಾಯ ಮಾಡಬೇಕೆಂಬ ಅವರ ಮೊಳಕೆಯಾದ ಆಸೆ, ಗ್ವಾಟೆಮಾಲಾ ರ ಅಧ್ಯಕ್ಷ ಜಾಕೊಬೊ ಆರ್ಬೆನ್ಸ್ ಅವರ ಆಡಳಿತದಡಿಯಲ್ಲಿ ನಡೆದ ಸಾಮಾಜಿಕ ಸುಧಾರಣೆಗಳಲ್ಲಿ ಅವರನ್ನು ತೊಡಗಿಸಿತು. ಯುನೈಟೆಡ್ ಫೂಟ್ ಕಂಪನಿಯ ಒತ್ತಾಯದ ಮೇರೆಗೆ ಸಿಐಎ ಸಹಾಯದಿಂದ ನಡೆದ ಆರ್ಬೆನ್ಸ್ ಅವರ ಪತನವು, ಗುವೆರಾ ರ ರಾಜಕೀಯ ತತ್ತ್ವವನ್ನು ಗಟ್ಟಿಗೊಳಿಸಿತು.
ನಂತರ ಮೆಕ್ಸಿಕೊ ನಗರದಲ್ಲಿ ಗುವೆರಾ ರೌಲ ಮತ್ತು ಫಿಡೆಲ್ ಕ್ಯಾಸ್ಪೋರನ್ನು ಭೇಟಿಯಾಗಿ ಅವರ 26ನೇ ಜುಲೈ ಚಳವಳಿಗೆ ಸೇರಿದರು. ಅಮೆರಿಕ ಬೆಂಬಲಿತ ತಂತ್ರಶಾಹಿ ಫುಲೆನ್ಸಿಯೊ ಬಾಟಿಸ್ತಾವನ್ನು ಉರುಳಿಸುವ ಉದ್ದೇಶದಿಂದ ಅವರು ಗ್ರಾನ್ನಾ ಎಂಬ ಹಡಗಿನಲ್ಲಿ ಕ್ಯೂಬಾಗೆ ತೆರಳಿದರು., ಗುವೆರಾ ಶೀಘ್ರದಲೇ ಬಂಡುಕೋರರ ನಡುವೆ ಪ್ರಮುಖ ಸ್ಥಾನ ಪಡೆದರು. ಉಪನಾಯಕನಾಗಿ ಪದೋನ್ನತಿ ಹೊಂದಿದರು ಮತ್ತು ಬಾಟಿಸ್ತಾ ಆಡಳಿತವನ್ನು ಕೆಡವಿದ ಎರಡು ವರ್ಷದ ಗುರೆಲ್ಲ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಕ್ಯೂಬನ್ ಕ್ರಾಂತಿಯ ನಂತರ, ಗುವೆರಾ ಹೊಸ ಸರ್ಕಾರದಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದರು. ಇವುಗಳಲ್ಲಿ ಕ್ರಾಂತಿಕಾರಿ ನ್ಯಾಯಮಂಡಳಿಗಳ ಯುದ್ಧ ಅಪರಾಧಿಗಳೆಂದು ದೋಷಾರೋಪಿತರಾದವರ ಮೇಲ್ಮನವಿಗಳು ಹಾಗೂ ಮರಣದಂಡನೆಗಳನ್ನು ಪರಿಶೀಲಿಸುವುದು, ಕೈಗಾರಿಕಾ ಸಚಿವನಾಗಿ ಕೃಷಿ ಭೂ ಸುಧಾರಣೆಗಳನ್ನು ಜಾರಿಗೊಳಿಸುವುದು, ದೇಶವ್ಯಾಪಿ ಸಾಕ್ಷರತಾ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಲು ಸಹಾಯ ಮಾಡುವುದು, ರಾಷ್ಟ್ರೀಯ ಬ್ಯಾಂಕ್ ಅಧ್ಯಕ್ಷನಾಗಿಯೂ ಕ್ಯೂಬಾದ ಸಶಸ್ತ್ರ ಪಡೆಗಳ ತರಬೇತಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುವುದು, ಮತ್ತು ಜಗತ್ತಿನಾದ್ಯಂತ ಸಂಚರಿಸುವುದು ಸೇರಿವೆ.
ಕ್ಯೂಬಾದ ಸಶಸ್ತ್ರ ಪಡೆಗಳೊಂದಿಗೆ ಸಂಬಂಧ ಹೊಂದಿ, ಕ್ಯೂಬನ್ ಸಮಾಜವಾದದ ಪರವಾಗಿ ರಾಜತಾಂತ್ರಿಕನಾಗಿ ಜಗತ್ತಿನಾದ್ಯಂತ ಸಂಚರಿಸಿದರು. ಇಂತಹ ಹುದ್ದೆಗಳು ಬೇ ಆಫ್ ಪಿಗ್ ಆಕ್ರಮಣವನ್ನು ಹಿಮ್ಮೆಟ್ಟಿಸಿದ ಮಿಲಿಷಿಯಾ ಪಡೆಗಳಿಗೆ ತರಬೇತಿ ನೀಡುವಲ್ಲಿ ಅವರು ಕೇಂದ್ರ ಪಾತ್ರ ವಹಿಸಲು ಸಹಾಯ ಮಾಡಿತು. ಇದಲ್ಲದೆ, ಸೋವಿಯತ್ ಯುನಿಯನ್ ನ ಅಣುಶಸ್ತ್ರ ಸಜ್ಜಿತ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಕ್ಯೂಬಾಗೆ ತರಲು ಕಾರಣವಾದ ನಿರ್ಧಾರದಲ್ಲೂ ಅವರು ಪಾತ್ರವಹಿಸಿದರು; ಈ ನಿರ್ಧಾರವೇ ಅಂತಿಮವಾಗಿ 1962ರ ಕ್ಯೂಬನ್ ಕ್ಷಿಪಣಿ ಸಂಕಷ್ಟಕ್ಕೆ ಕಾರಣವಾಯಿತು.
ಇದಕ್ಕೆ ಜೊತೆಯಾಗಿಯೇ, ಗುವೆರಾ ಅತ್ಯಂತ ಉತ್ಪಾದಕ ಲೇಖಕ ಹಾಗೂ ದಿನಚರಿಕಾರರಾಗಿದ್ದರು. ಅವರು ಮಹತ್ವದ ಗೆರಿಲ್ಲಾ ಯುದ್ಧ ತಂತ್ರಗಳ ಕೈಪಿಡಿಯನ್ನು ರಚಿಸಿದರು ಹಾಗೂ ತಮ್ಮ ಯೌವ್ವನದ ಖಂಡಾಂತರ ಮೋಟಾರ್ಸೈಕಲ್ ಪ್ರಯಾಣದ ಕುರಿತು ಬರೆದ ಸ್ಮರಣಿಕೆಯನ್ನು ಪ್ರಕಟಿಸಿದರು, ಅದು ಅತ್ಯಂತ ಜನಪ್ರಿಯವಾಯಿತು. ಮಾರ್ಕ್ಸವಾದ-ಲೆನಿನವಾದದ ಅಧ್ಯಯನ ಮತ್ತು ತಮ್ಮ ಅನುಭವಗಳ ಆಧಾರದಲ್ಲಿ ತೃತೀಯ ಲೋಕದ ಅವಿಕಸನ ಮತ್ತು ಅವಲಂಬನೆ ಸಾಮ್ರಾಜ್ಯವಾದ, ನವವಸಾಹತುಶಾಹಿ ಮತ್ತು ಏಕಾಧಿಕಾರ ಪೂಂಜಿವಾದದ ಸಹಜ ಫಲಿತಾಂಶವೆಂದು ಅವರು ಪ್ರತಿಪಾದಿಸಿದರು. ಇದಕ್ಕೆ ಏಕೈಕ ಪರಿಹಾರವೆಂದರೆ ಕಾರ್ಮಿಕ ವರ್ಗದ ಅಂತರರಾಷ್ಟ್ರೀಯತೆ ಮತ್ತು ಜಾಗತಿಕ ಕ್ರಾಂತಿ ಎಂದು ಅವರು ನಂಬಿದರು.
1965ರಲ್ಲಿ, ಗುವೆರಾ ಕ್ಯೂಬಾವನ್ನು ತೊರೆದು, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದಾದ್ಯಂತ ಖಂಡಾಂತರ ಕ್ರಾಂತಿಗಳನ್ನು ಪ್ರಚೋದಿಸಲು ಹೊರಟರು. ಮೊದಲು ಕಾಂಗೋ ಕಿನ್ನಾಸಾದಲ್ಲಿ ವಿಫಲರಾದರು; ನಂತರ ಬೊಲಿವಿಯಾದಲ್ಲಿ ಸಿಐಎ ಸಹಾಯ ಪಡೆದ ಬೊಲಿವಿಯನ್ ಪಡೆಗಳಿಂದ ಬಂಧಿಸಲ್ಪಟ್ಟು, ಸಂಕ್ಷಿಪ್ತವಾಗಿ ಮರಣದಂಡನೆಗೆ ಒಳಗಾದರು.
ಗುವೆರಾ ಇಂದಿಗೂ ಪೂಜಿಸಲ್ಪಡುವವರಾಗಿಯೂ ದ್ವೇಷಿಸಲ್ಪಡುವವರಾಗಿಯೂ ಇರುವ ಐತಿಹಾಸಿಕ ವ್ಯಕ್ತಿಯಾಗಿದ್ದಾರೆ. ಅನೇಕ ಜೀವನಚರಿತ್ರೆಗಳು, ಸ್ಮರಣಿಕೆಗಳು, ಪ್ರಬಂಧಗಳು, ಡಾಕ್ಯುಮೆಂಟರಿಗಳು, ಹಾಡುಗಳು ಮತ್ತು ಚಿತ್ರಚಿತ್ರಗಳಲ್ಲಿ ಅವರು ಸಾಮೂಹಿಕ ಕಲ್ಪನೆಯಲ್ಲಿ ವಿಭಜಿತ ಅಭಿಪ್ರಾಯಗಳನ್ನು ಉಂಟುಮಾಡಿರುವ ವ್ಯಕ್ತಿಯಾಗಿದ್ದಾರೆ
